Swaagatam

स्वागतम्

Saturday, March 14, 2009

ನಾನೇ ಭಾರತ !

ಭಾರತವು ಸೂಪರ್ ಪವರ್ ಆಗುವುದೆಂಬ ಕಲರವ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಸೂಪರ್ ಪವರ್‌ಗಳು ರಾಷ್ಟ್ರೀಯತೆಯ ಬಗೆಗೆ ಭ್ರಮೆಯನ್ನು ಹೊಂದಿವೆಯೇ ? ಅಥವಾ ತಮ್ಮ ಹಿಂದುಳಿದ ನಾಗರೀಕತೆಯನ್ನು ಬದಲಾಯಿಸಲು ಬೇರೆಯವರಿಗೆ ಆಹ್ವಾನ ನೀಡುವುದು ಎಂದರ್ಥವೇ ? ಸೂಪರ್ ಪವರ್ ಆದ ಯಾವುದಾದರೂ ದೇಶವು ಯಾವತ್ತಾದರೂ ತನ್ನ ಪ್ರಜೆಗಳನ್ನು ವಿದೇಶೀ ಒಪ್ಪಂದದ ಏಜೆಂಟರಾಗಿ ಬಳಸಿಕೊಳ್ಳಲು ಅನವು ಮಾಡಿಕೊಡುತ್ತದೆಯೇ ? ಇಲ್ಲ. ಆದರೆ, ಭಾರತವು ಉದಾರವಾಗಿ ವಿದೇಶೀ ಒಪ್ಪಂದಗಳನ್ನು ಒಪ್ಪಿಕೊಳ್ಳುತ್ತಿದೆ. ಇದರಿಂದ ಭಾರತವವನ್ನು ಅವರು ವಿಭಕ್ತವಾಗೇ ಕಾಣುತ್ತಾರೆ. ಆದರೆ ಸೂಪರ್ ಪವರ್‌ಗಳು ಅಂದರೆ ತಪ್ಪು ತಿಳುವಳಿಕೆ ಎಂದರ್ಥವೇ ?
ಮುಂಬಯಿಯ ಮಾರಣಹೋಮವು ನಮ್ಮ ರಾಷ್ಟ್ರೀಯ ಚಾರಿತ್ರ್ಯದ ಒಡಕುಗಳನ್ನು ನೋವಿನಿಂದಲೇ ಜಾಹೀರುಗೊಳಿಸುತ್ತದೆ. ಕೇಂದ್ರವು ಅಸ್ಥಿರ ಮತ್ತು ಉದ್ದೇಶರಹಿತ ಅಸ್ತಿತ್ತ್ವದಿಂದ ಕೂಡಿದೆ. ಇಲ್ಲಿ ಪಾರಸ್ಪರಿಕ ಮತ್ತು ಅಂತಾರಾಷ್ಟ್ರಿಯ ಹಿತಾಸಕ್ತಿಗಳನ್ನು ಹೊಂದಿರುವ ಈ ನಾವು ಎಂದರೆ ಯಾರು ? ಈ ಭಾರತೀಯತೆಯನ್ನು ಹೇಗೆ ವ್ಯಾಖ್ಯಾನಿಸಬೇಕು ? ಭಾರತೀಯತೆಯೆಂದರೆ ಸಂಕುಚಿತ ಅಸ್ತಿತ್ವ ಹಾಗೂ ಆಂತರಿಕ ಹಿತಾಸಕ್ತಿ ಮಾತ್ರವೇ ? ಅಥವಾ ಅದು ತ್ಯಾಗಕ್ಕೆ ಮಾತ್ರ ಸೀಮಿತವೇ ? ಅದು ಬಾಲಿವುಡ್‌ನ ಪ್ರಸಿದ್ಧ ಸಂಸ್ಕೃತಿಯಲ್ಲದೆಯೇ ? ಅಥವಾ ಕ್ರಿಕೆಟ್‌ನಲ್ಲಿದೆಯೇ ? ಅಥವಾ ಅದು ಇನ್ನೂ ಆಳವಾಗಿದೆಯೇ ? ಈ ರಾಷ್ಟ್ರೀಯ ಅಸ್ತಿತ್ವದ ಯೋಜನೆಯು ಈಗಿನ ಅತ್ಯಂತ ಆವಶ್ಯಕತೆಯಾಗಿದೆ ಮತ್ತು ಅದನ್ನು ನಾವು ಒತ್ತಾಯವಾಗಿ ಸ್ಥಾಪಿಸಬೇಕಿದೆ.

ರಾಷ್ಟ್ರೀಯ ಅಸ್ತಿತ್ವದ ಆವಶ್ಯಕತೆ :

ವೈಯಕ್ತಿಕ ಗುರಿಯನ್ನು ಬೆನ್ನಟ್ಟುವಲ್ಲಿ ಭಾರತೀಯರು ತೀವ್ರ ಸ್ಫರ್ಧಾಶೀಲರು. ಆದರೆ, ನಾವು ಪಾಲುದಾರರಾಗಿಗುವ ರಾಷ್ಟ್ರೀಯ ಸತ್ವದ ವಿಷಯದಲ್ಲಿ ಮಾತ್ರ ನಮಗೆ ಐಕಮತ್ಯವಿಲ್ಲ. ಆದ್ದರಿಂದಲೇ, ಪ್ರಜೆ ಮತ್ತು ರಾಷ್ಟ್ರದ ಮಧ್ಯೆ ಆಳವಾದ ಮಾನಸಿಕ ಬಾಂಧವ್ಯವಿಲ್ಲ. ಶರೀರಕ್ಕೆ ರೋಗ ನಿರೋಧಕ ಶಕ್ತಿ ಇರುವಂತೆ ರಾಷ್ಟ್ರದ ಹಿತ ಕಾಪಾಡಲು ರಾಷ್ಟ್ರೀಯ ಅಸ್ತಿತ್ವದ ಆವಶ್ಯಕತೆ ಇರುತ್ತದೆ. ಶರೀರದ ಮೇಲೆ ಒತ್ತಡ ಹೆಚ್ಚಾದಾಗ, ಅದು ಆಂತರಿಕ ಮತ್ತು ಬಾಹ್ಯ ಆಕ್ರಮಣಗಳಿಗೆ ಈಡಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಸಾವಿಗೆ ಈಡಾಗುತ್ತದೆ. ಹಾಗೆಯೇ, ಒಂದು ರಾಷ್ಟ್ರವು - ಅಸ್ತಿತ್ವದ ಅಭಾವ, ಅಸ್ತಿತ್ವಗಳ ಪರಸ್ಪರ ಘರ್ಷಣೆ ಅಥವಾ ಇನ್ನಿಲ್ಲದ ಗೊಂದಲಗಳು ಉಂಟಾದಾಗ ಒತ್ತಡ ಹೆಚ್ಚಾಗಿ ಒಡೆಯಬಹುದು. ಶರೀರದ ರೋಗ ನಿರೋಧಕ ಶಕ್ತಿಗೆ ನವ ತಾರುಣ್ಯವನ್ನು ಹೇಗೆ ಮತ್ತೆ ಮತ್ತೆ ನೀಡಬೇಕೋ, ಹಾಗೆಯೇ ಒಂದು ರಾಷ್ಟ್ರದ ರಾಜಕೀಯ ಏಕತೆಗೆ ಸತ್ವಯುತ ಐಕ್ಯಶಾಲಿ ಆತ್ಮದ ಆವಶ್ಯಕತೆ ಇದೆ.
ಪ್ರಮುಖ ರಾಷ್ಟ್ರಗಳು ದೂರದೃಷ್ಟಿಯಿಂದ ರಾಷ್ಟವನ್ನು ಕಟ್ಟಲು - ಕಲ್ಪಿತ ಕಥೆ, ಇತಿಹಾಸ, ನಾಯಕರು, ಮತ, ಸಿದ್ಧಾಂತ, ಭಾಷೆ, ಮತ್ತು ಚಿಹ್ನೆ ಮುಂತಾದ ಸಾಧನಗಳನ್ನು ಬಳಸುತ್ತಾರೆ. ಆಂತರಿಕ ಮತಭೇದಗಳಿದ್ದರೂ ಅಮೆರಿಕನ್ನರಿಗೆ ಅವರ ಪೂರ್ವಜರು ಸಂಪಾದಿಸಿದ ಸ್ವತ್ತಿನ ಬಗೆಗೆ ಅಪಾರ ಅಭಿಮಾನವಿದೆ. ಮತ್ತು ಅವರು ತಮ್ಮ ಪೂರ್ವಜರ ಮತ್ತು ತ್ಯಾಗೀ ಸೈನಿಕರ ನೆನಪಿಗಾಗಿ ಅದ್ಭುತವಾದ ಸ್ಮಾರಕಗಳನ್ನು ಕಟ್ಟಿಸಿದ್ದಾರೆ. ೧೮೫೭ರ ಅಥವಾ ೧೯೫೧ರ ಯುದ್ಧಕ್ಕೆ ಗೌರವ ಸೂಚಿಸುವ ಅಥವಾ ಶಿವಾಜಿ, ವಿಜಯನಗರ ಸಾಮ್ರಾಜ್ಯ, ಅಶೋಕ ಮುಂತಾದವರನ್ನು ನೆನಪಿಸುವ ಹಾಗೂ ಭಾರತದ ನಾಗರೀಕತೆಯನ್ನು ಶಾಂತಿಪೂರ್ಣವಾಗಿ ಜಗತ್ತಿಗೆ ಪಸರಿಸಿದ ಬಗೆಗೆ ದೆಹಲಿಯಲ್ಲಿ ಉಲ್ಲೇಖವೆಲ್ಲಿದೆ ? ಜಗತ್ತಿನಲ್ಲಿ ಭಾರತದ ವಿಶಿಷ್ಟ ಸ್ಥಾನವನ್ನು ಸೂಚಿಸುವ ಮ್ಯೂಸಿಯಂಗಳೆಲ್ಲಿವೆ ?

ವಿಘಟಿತ ಶಕ್ತಿಗಳು :

ಭಾರತದ ಆಂತರಿಕ ರಾಜಕೀಯವನ್ನು ಮುರುಕು ಧ್ವನಿಗಳೇ ಆಳುತ್ತಿವೆ - ರಾಜ್ ಠಾಕ್ರೆಯಿಂದ ಹಿಡಿದು ಕರುಣಾನಿಧಿಯವೆರೆಗೆ. ಮಮತಾ ಬ್ಯಾನರ್ಜಿಯಿಂದ ಮೀಸಲಾತಿಯವೆರೆಗೆ. ಅಲ್ಲಿಂದ ವಿದೇಶೀ ಮತಾಂತರದ ಏಜೆಂಟರವರೆಗೆ.
ಸಾಮಾಜಿಕ ಅಸಮಾನತೆ - ಅದು ಭಾರತದಲ್ಲಾಗಲೀ ಅಥವಾ ವಿದೇಶದಲ್ಲೇ ಆಗಲೀ, ಅದಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಬೇಕು. ರೋಗ ಯಾವುದೆಂದು ನಿರ್ಣಯಿಸದೇ ಸರಿಯಾದ ಚಿಕಿತ್ಸೆ ನೀಡಲಾಗದು. ಭಾರತಕ್ಕೆ ನಾಗರೀಕತೆ ಎಂಬುದೇ ಇರಲಿಲ್ಲವೆಂದು ವಸಾಹತುಶಾಹಿಯ ಕಾಲದಿಂದಲೂ ಅನೇಕ ಪ್ರಭಾವಿ ವಿದ್ವಾಂಸರು ಭಾಷಣ ಮಾಡುತ್ತಾ ಬಂದಿದ್ದಾರೆ. ಆಕ್ರಮಣಕಾರರಿಂದ ಭಾರತವು ನಾಗರೀಕವಾಯಿತು. ಭಾರತೀಯತೆಯ ಬಗೆಗಿನ ಹುಟುಕಾಟ ವ್ಯರ್ಥ. ಏಕೆಂದರೆ ಭಾರತವು ಒಂದು ರಾಷ್ಟ್ರವೇ ಆಗಿರಲಿಲ್ಲ. ರೋಮಿಲಾ ಥಾಪರ್‌ನಂತಹ ಪ್ರಸಿದ್ಧ ಇತಿಹಾಸಕಾರರು ಭಾರತದ ವಿವಿಧತೆ ಸತ್ವರಹಿತ ಎಂಬ ನಿರ್ಣಯ ನೀಡುತ್ತಾರೆ. ಉದ್ದಿನ ವಡೆಯಂತೆ ಮಧ್ಯೆ ಶೂನ್ಯ ಇದೆ. ಅದರ ಪರಿಧಿಯಲ್ಲಿ ಮಾತ್ರ ಅಸ್ತಿತ್ವವಿದೆ.
ಇಂತಹ ಚಿಂತನೆಗಳು ಭಾರತದ ಸಜ್ಜನರನ್ನು ಬಾಧಿಸುತ್ತವೆ. ಸುಪ್ರೀಮ್ ಕೋರ್ಟ್‌ನ ನ್ಯಾಯಾಧೀಶರಾದ ಮಾರ್ಕಂಡೇಯ ಕಟ್ಜೂರವರು ವಿದೇಶೀ ಇತಿಹಾಸಕಾರರನ್ನು ಉಲ್ಲೇಖಿಸುತ್ತಾ ಮುಂಡಾ ಎಂಬ ಪಂಗಡವೊಂದೇ ಮೂಲನಿವಾಸಿಗಳದು. ಉಳಿದ ೯೫% ಭಾರತೀಯರು ಬೇರೆಡೆಯಿಂದ ವಲಸೆ ಬಂದವರು ಎಂದು ಹೇಳುತ್ತಾರೆ. ಮತ್ತು ಆರ್ಯ ಮತ್ತು ದ್ರಾವಿಡ ಶಾಸ್ತ್ರೀಯ ಭಾಷೆಗಳೂ ವಿದೇಶಿ. ಪ್ರಾಚೀನ ಎಂದು ಹೇಳಿಕೊಳ್ಳುವ ಯಾವ ಅಂಶವೂ ಭಾರತೀಯತೆಯಲ್ಲಿಲ್ಲ. ಭಾರತದ ನಾಗರೀಕತೆಯ ಆರಂಭವಾಗುವುದೇ - ಜಗತ್ತು ಕಂಡ ಅತ್ಯಂತ ಶ್ರೇಷ್ಠ ರಾಜ ಅಕ್ಬರ್‌ನಿಂದ.
ಭಾರತವನ್ನು - ಒಳಗೆ ಜೊಳ್ಳಿನಿಂದ ಕೂಡಿರುವ, ದುಃಸಹವಾದ ರಾಷ್ಟ್ರ ಎಂದು ಬಿಂಬಿಸುತ್ತಿರುವವರ ಧ್ವನಿ ಏರುತ್ತಿದೆ ಇದನ್ನು ನಿರ್ದೇಶಿಸುತ್ತಿರುವವರು ಪಶ್ಚಿಮದ ವಿಶ್ವವಿದ್ಯಾಲಯಗಳು. ಉದ್ದೇಶ ಸ್ಪಷ್ಟ - ಮಾನವ ಹಕ್ಕುಗಳನ್ನು ಮಧ್ಯೆ ತರುವ ಮೂಲಕ ಹಸ್ತಕ್ಷೇಪ ನಡೆಸುವುದು. ಇದಕ್ಕೆ ಅನೇಕ ಖಾಸಗಿ ಸಂಸ್ಥೆಗಳು, ಚರ್ಚುಗಳು ಮತ್ತು ಅಮೆರಿಕದ ಸರ್ಕಾರ ಕೂಡ ಕುಮ್ಮಕ್ಕು ನೀಡುತ್ತಿದೆ. ಇದು ಮುರುಕುತನಕ್ಕೆ ಕಾರಣವಾಗುತ್ತದೆ. ಮತೀಯ ಅಸ್ತಿತ್ವಗಳಿಗೆ ಮತ್ತು "ಹಿಂದುಳಿದ"ಜಾತಿಗಳಿಗೆ ಹಾಗೂ ಮತೀಯ ಅಲ್ಪಸಂಖ್ಯಾತರಿಗೆ ಒತ್ತು ಕೊಡುವ ಮೂಲಕ ಇದು ಹೆಚ್ಚುತ್ತದೆ. ದುಃಖದ ಸಂಗತಿಯೆಂದರೆ ಅನೇಕ ಪ್ರತಿಭಟನಕಾರರು, ಪಶ್ಚಿಮೀಕರಣಗೊಂಡ ಉಚ್ಚವರ್ಗದವರು ಈ "ಹಿಂದುಳಿದವರ ತುಳಿತ"ಕ್ಕೆ ಬೆಂಬಲ ನೀಡುತ್ತಿದ್ದಾರೆ. ಭಾರತದ ಒಡಕಿನ ನಂತರದ ಮಾನವತೆಯ ಪರಿಣಾಮವು ವಿಬಜಿತ ಸಮುದಾಯಗಳಲ್ಲಿ (ವಿಶೇಷವಾಗಿ ದುರ್ಬಲ) ಅಂತ್ಯ ಕಂಡೀತು. ಆಗ ಅವುಗಳನ್ನು ನಾವು ಸಂತೋಷದಿಂದಲೇ ತಿರಸ್ಕರಿಸಿಯೇವು.

ಸಮತೆ ಮತ್ತು ಸಹಿಷ್ಣುತೆಗಳಿಂದಾಚೆಗೆ :

ಭಾರತದ ಅಸ್ತಿತ್ವವು ಫ್ಯಾಸಿಸಂ ಅನ್ನು ಬೆಂಬಲಿಸುತ್ತದೆ ಎಂಬುದಾಗಿ ವಿಮರ್ಶಕರಿಗೆ ಭಾರೀ ಚಿಂತೆಯಾಗಿದೆ. ಅನೇಕ ನಾಗರೀಕತೆಗಳು ಅಸ್ತಿತ್ವಗಳನ್ನು ವಿಜಯದ ಉದ್ದೇಶಕ್ಕಾಗಿ ಬಳಸಿವೆ. ನನ್ನ ಚಿಂತನೆಯ ಭಾರತೀಯತೆಯೆಂದರೆ ಪರಸ್ಪರ ಗೌರವ ಸೂಚಿಸುವುದು. ನಾವು ಬೇರೆಯವರನ್ನು ಗೌರ"ಸುತ್ತೇವೆ. ಆದರೆ, ಇದು ಸಾಧ್ಯವಾಗುವುದು ಬೇರೆಯವರು ತಮ್ಮ ಮಾತು ಮತ್ತು ಕೃತಿಯಲ್ಲಿ ಗೌರವ ಸೂಚಿಸಿದಾಗ ಮಾತ್ರ. ಯಹೂದ್ಯ, ಇಸ್ಲಾಂ, ಕ್ರಿಶ್ಚಿಯನ್ ಮುಂತಾದ "ಪರಸಹಿಷ್ಣು" ಮತಗಳಿಗೆ ಅನುಗ್ರಾಹಕ ಮನಸ್ಥಿತಿದೆ. ಅವರು ಇನ್ನೊಬ್ಬರ ಮಾತು ಅಥವಾ ಕೃತಿಯನ್ನು ಗೌರವಿಸದೇ ತಮ್ಮ ಮತವೇ ಶ್ರೇಷ್ಠ ಎಂಬ ಭಾವನೆ ಹೊಂದಿದ್ದಾರೆ. ಇದೇ ವೇಳೆಗೆ, ಭಾರತದ ನಾಗರೀಕತೆಯು ವಿಸಂಗತಿಗಳನ್ನೂ ಅಪ್ಪಿಕೊಳ್ಳುತ್ತದೆ.
ಅಸಮಾನತೆಯನ್ನು ನಿವಾರಿಸಬೇಕೆನ್ನುವವರ ಆಂದೋಲನಗಳು ಎಲ್ಲ ಮತಗಳನ್ನೂ ವ್ಯಾಪಿಸಿವೆ. ಕೆಲವು ಮತಗಳು ಮತಾಂತರ ಮಾಡಲು ದೇವರಿಂದ ಅಧಿಕಾರ ಪಡೆದಿದ್ದಾರೆ. ಸಾಂಸ್ಕೃತಿಕ ಭಿನ್ನತೆಗಳು ಮೇಳೈಸಿದಾಗ ದೇವರಿಂದ ಆದೇಶಿಸಲ್ಪಟ್ಟ ಯುರೋಪಿಯನ್ ಮೋಕ್ಷ ಯೋಜನೆಯು ಅಮೆರಿಕಾದ ಮೂಲ ನಿವಾಸಿಗಳ ಮಾರಣಹೋಮದ ಮೂಲಕ ಮತ್ತು ಆಫ್ರಿಕನ್ನರ ದಾಸ್ಯದ ಮೂಲಕ ಅಸಮಾನತೆಯನ್ನು ನಿವಾರಿಸಿತು. ಏಯನ್ನರು ಭಾಗ್ಯಶಾಲಿಗಳು. ಏಕೆಂದರೆ, ಅವರು ವಸಾಹತುಶಾಯ ಮೂಲಕ "ಕಡಿಮೆ ಭಿನ್ನತೆ"ಯುಳ್ಳವರಾದರು.
ಇವತ್ತು ಅನೇಕ ಭಾರತೀಯರು ಅಸಮಾನತೆಯನ್ನು ಅಳಿಸಿ ಹಾಕಲು ಪಾಶ್ಚಾತ್ಯ ಶೈಲಿಯನ್ನು ಚಿನ್ನದಂತೆ ಅನುಸರಿಸುತ್ತಾರೆ. "ಗೆ ಪಾಶ್ಚಾತ್ಯ ಶೈಲಿಯನ್ನು ವೈಭವೀಕರಿಸುತ್ತಿರುವವರು ಪ್ರಮುಖವಾಗಿ ಲೇಖಕರು. ಮಾಧ್ಯಮ ಮತ್ತು ಪಾಪ್ ಸಂಸ್ಕೃತಿಯನ್ನು ಅನುಸರಿಸುತ್ತಿರುವವರು ಬಿಳಿಯರ ಸೌಂದರ್ಯ, ಶರೀರಭಾಷೆ, ಮತ್ತು ಬಟ್ಟೆಗಳನ್ನು - ಸಾಮಾಜಿಕ ಘನತೆ, ಜೀವನಕ್ರಮ ಮತ್ತು ವಿವಾಹ ಸಮಾರಂಭಗಳಿಗಾಗಿ ಬಳಸುತ್ತಿದ್ದಾರೆ. ಆದರಣೀಯವಾದ 'ನಮಸ್ತೆ' ಎನ್ನುವುದು ಹಳೆ ಸಂಪ್ರದಾಯ ಮತ್ತು ಕೆಲಸದವರು ಬಳಸುವ ಪದವಾಗಿ ಪರಿಣಮಿಸಿದೆ. ಧಾಮಿ೵ಕ ಮತ್ತು ಅಧಾಮಿ೵ಕ ಎಂಬ ಭೇದವನ್ನೂ ಲೆಕ್ಕಿಸದೇ ಹಿಂದೂ ಪಾಪ್ ಗುರುಗಳು "ಎಲ್ಲವೂ ಒಂದೇ" ಎಂಬ ಮಂತ್ರವನ್ನು ಜಪಿಸುತ್ತಿದ್ದಾರೆ. ಬುದ್ಧಿಜೀವಿಗಳು ವಿದೇಶೀ ಪ್ರವಚನಪದ್ಧತಿಯನ್ನು "ಸಾರ್ವತ್ರಿಕ" ಎಂದು ಸಮರ್ಥಿಸಿ ಬಳಸಿಕೊಳ್ಳುತ್ತಿದ್ದಾರೆ.
ಅವರು ಸಿದ್ಧಾಂತಗಳ ಅಸಮಾನತೆಯನ್ನು ದೂರಮಾಡುವುದು ಆಧಿಪತ್ಯವನ್ನು ಸ್ಥಾಪಿಸುವ ಮೂಲಕ. ಒಂದೋ (i) ನೀವು ಅವರಲ್ಲೊಂದಾಗಬೇಕು. (ii) ವಿರೋಧಿಸಿ ಕಷ್ಟ ಅನುಭವಿಸಬೇಕು ಅಥವಾ (iii) ಅವರೊಳಗೇ ಸೇರಿಹೋಗಿ ಅಲ್ಪಸಂಖ್ಯಾತರಾಗಬೇಕು.
ಭಾರತೀಯ ವೇದಾಂತವು ಮರ, ಹೂವು, ವಸ್ತು, ಮಾನವಶರೀರ, ಮನಸ್ಸು, ಭಾಷೆ, ಸಂಸ್ಕೃತಿ, ಆಧ್ಯಾತ್ಮ, ಪದ್ಧತಿ - ಮುಂತಾದವುಗಳ ಅನೇಕತೆಯನ್ನು ವರವಾಗಿ ಸ್ವೀಕರಿಸಿದೆ.
ಸಾಮಾನ್ಯವಾಗಿ ಎಲ್ಲ ಸಾಮಾಜಿಕ ಗುಂಪುಗಳೂ ತಮ್ಮೊಳಗೆ ಪರಸ್ಪರ ಸಂಬಂಧವನ್ನು ಹೊಂದಿರುತ್ತವೆ. ಆದರೆ, ಪ್ರಾಚೀನ ಭಾರತೀಯ ಆದರ್ಶದಂತೆ ಈ ಸಂಬಂಧವು ಪರಸ್ಪರರನ್ನು ಆಕ್ರಮಿಸದೇ ಪಡೆಯುವಂತಹುದು. ವಸಾಹತುಶಾಹಿಯೆಂಬ ಸಾಮಾಜಿಕ ತಂತ್ರಜ್ಞಾನ ಬರುವುದಕ್ಕಿಂತ ಮೊದಲು ಭಾರತೀಯ ಜಾತಿಗಳು ಪರಸ್ಪರ ಒಳಹರಿವನ್ನು ಹೊಂದಿದ್ದವು. ಅವು ಅಸ್ತಿತ್ವದ ಆಧಾರ ಸ್ತಂಭಗಳಾಗಿ ಒಂದಕ್ಕೊಂದು ಒಗ್ಗೂಡಿದ್ದವು. ಮತ್ತು ಈಗಿರುವಂತೆ ಕಠಿಣ ಮತ್ತು ದೃಢವಾದ ವಿಭಾಗವನ್ನು ಹೊಂದಿರಲಿಲ್ಲ. ಈ ಪದ್ಧತಿ ಮುಸ್ಲಿಂ, ಕ್ರಿಶ್ಚಿಯನ್, ಹಾಗೂ ಹಿಂದೂಗಳಿಗೆ ಸಮಾನವಾಗಿದ್ದಿತು. ಪ್ರತಿಯೊಂದು ಜಾತಿಗೂ ಒಂದು ಆದರ್ಶವಿರುತ್ತಿತ್ತು. ಮತ್ತು ಅದು ಬೇರೆಯವರಿಂದ ಗೌರವ ಪಡೆಯುತ್ತಿತ್ತು. ನನ್ನ ಭಾರತವೆಂದರೆ ವಂಶಾವಳಿಗಳನ್ನು ಕೋಶದಿಂದ ಆವರಿಸಿರುವ ಸಾವಿರಾರು ಜಾತಿಗಳುಳ್ಳ ಒಂದು ಬಲೆ. ಈ ಕಲ್ಪನೆ ಸ್ವ-ಜನಾಂಗ ಕೇಂದ್ರಿತವಾದ ಫ್ಯಾಸಿಸಂಗಿಂತ ಪೂರ್ತಿ ಭಿನ್ನವಾದುದು.

ಇರಲಿ ವಿವಿಧತೆ, ಬೇಡ ವಿಘಟನೆ :

ಸಾಮಾಜಿಕವಾಗಿ ಪರಸ್ಪರ ಒಳಹರಿವನ್ನು ಹೊಂದಿ ಬೇಕಾದಾಗ ಬದಲಾಯಿಸಬಹುದಾಗಿದ್ದ ಜಾತಿಗಳು ಭಾರತದ ವಿವಿಧತೆಯನ್ನು ಕಾಪಾಡಿದ್ದವು. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಜೀವಂತವಾಗಿಡಲು ನಿರ್ದಿಷ್ಟ ಪರಿಧಿಯೊಳಗೆ ಜಾತಿಗಳನ್ನು ತಳ್ಳಲಾಯಿತು. ಸ್ವತಂತ್ರ ಭಾರತದಲ್ಲಿ ಜಾತಿಯ ಅಸ್ತಿತ್ವವನ್ನು ವೈಯಕ್ತಿಕ ಹಕ್ಕುಗಳ ರಕ್ಷಣೆಗೆ ಬಳಸುವ ಬದಲು ಮೀಸಲಾತಿಗಾಗಿ ಬಳಸಲಾಯಿತು. ಕಾಂಗ್ರೆಸ್ ಪಕ್ಷವು ಉಪ-ಅಸ್ತಿತ್ವಗಳ ಕಲಸುಮೇಲೋಗರವನ್ನು ಸಂಘಟಿಸಲು ಅಸಮರ್ಥವಾದಾಗ, ಪ್ರಾದೇಶಿಕ ವೋಟ್‌ಬ್ಯಾಂಕ್‌ನ ದಲ್ಲಾಳಿಗಳು ಭಾರತದ ರಾಜಕೀಯ ವಿಘಟನೆಗಳನ್ನು ಆಕ್ರಮಿಸಿದರು. ಈಗ, ಆಂತರಿಕ ವಿಘಟನೆಗಳನ್ನು ಬೆಂಬಲಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ದೇಶದ ಹಿತಾಸಕ್ತಿಗಳನ್ನು ಬಲಿಗೊಡಲಾಗುತ್ತಿದೆ.
ಜಾಗತೀಕರಣವೆಂಬ ಮಹಾ ಅಧ್ಯಾಯವು ಅಲ್ಪಸಂಖ್ಯಾತ ನಾಯಕರಿಗೆ ಪಶ್ಚಿಮದ ಚರ್ಚುಗಳು, ಸಂಸ್ಥೆಗಳು, ಅರಬ್ ಮತ್ತು ಚೈನೀಸರೊಡನೆ ಒಪ್ಪಂದ ಮಾಡಿಕೊಳ್ಳಲು ಹೆಬ್ಬಾಗಿಲನ್ನೇ ತೆರೆಯಿತು. ಮತ್ತು ಯಾರಾದರೂ ಭಾರತವೆಂಬ ಆನೆಯ ಅಂಗಗಳನ್ನು ಕೆತ್ತಿಕೊಳ್ಳಲು ಬಯಸಿದರೆ ಅವರಿಗದು ಸುಲಭವಾಗಿ ಸಿಗುವಂತಾಯಿತು. ಅಂತಹ ಅಲ್ಪಸಂಖ್ಯಾತರಲ್ಲೊಬ್ಬರು - ನಾಗಾಗಳು - ಅವರೀಗ ದಕ್ಷಿಣ ಟೆಕ್ಸಾಸ್‌ನ ಬ್ಯಾಪ್ಟಿಸ್ಟ್ ಚರ್ಚುಗಳ ನೇಮಕಗೊಂಡ ವಿದೇಶೀ ಉಪಾಂಗವಾಗಿದ್ದಾರೆ ; ಮೊದಲು ದ್ರಾವಿಡೀಕರಣಗೊಂಡ ತಮಿಳರು ಅಸ್ತಿತ್ವ ತಂತ್ರಜ್ಞಾನದ ಮೂಲಕ ಕ್ರಿಸ್ತೀಕರಣಗೊಂಡಿದ್ದಾರೆ ; ಮಾವೋವಾದಿಗಳು ದೇಶದ ೩೦% ಜಿಲ್ಲೆಗಳಲ್ಲಿದ್ದಾರೆ. ಅರಬರಿಂದ ಹಣ ಪಡೆಯುವ ಇಸ್ಲಾಮೀಪರರ ಸಂಖ್ಯೆ ಭಾರತದಲ್ಲಿ ಏರುಗತಿಯಲ್ಲಿದೆ. ಈ ವಿಘಟಿತ ಅಸ್ತಿತ್ವಗಳು ತಮ್ಮ ವಿದೇಶೀ ಮೂಲಗಳಿಗೆ ನಿಷ್ಠರಾದ ಕಾರಣ ಭಾರತೀಯತೆಯನ್ನವರು ನಿಶ್ಶಕ್ತಗೊಳಿಸುತ್ತಿದ್ದಾರೆ. ಆ ನಾಯಕರು ಹಣ ಮತ್ತು ಸಿದ್ಧಾಂತದ ಬೆಂಬಲಕ್ಕಾಗಿ ತಮ್ಮ ವಿದೇಶೀ ಮುಖ್ಯ ಕಛೇರಿಯನ್ನೇ ಅವಲಂಬಿಸುತ್ತಾರೆ.
ಅಂತಹ ಗುಂಪುಗಳಿಗ ಅಲ್ಪಸಂಖ್ಯಾತರಾಗಿ ಉಳಿದಿಲ್ಲ. ಅವರೀಗ ಪ್ರಭಾವಶಾಲೀ ಬಹುಸಂಖ್ಯಾತ ಗುಂಪಿನ ಏಜೆಂಟರಾಗಿದ್ದಾರೆ. ಅವರು ವೈಶ್ವಿಕ ಸಂಬಂಧಗಳನ್ನು ಬೆಳೆಸುವ ಅಧಿಕಾರಿಗಳಾಗಿದ್ದಾರೆ. ಭಾರತೀಯ ಅಸ್ತಿತ್ವವನ್ನು ರೂಪಿಸುವಲ್ಲಿ ಅವರು ಅಡ್ಡಗೋಡೆಗಳಾಗಿದ್ದಾರೆ. ಅವರು ನಿಜವಾಗಿಯೂ ಭಾರತದ ಹಿಂದುಳಿದವರನ್ನು ಮೇಲೆತ್ತಲು ಸಹಾಯ ಮಾಡಿದ್ದಾರೆಯೇ ? ಈ ವಿದೇಶೀ ಸಂಬಂಧಿಕರ ಸಮಸ್ಯಾ ಪರಿಹಾರದ ದಾಖಲೆಯನ್ನು ತೆಗೆದು ನೋಡಿದರೆ ನಿರಾಸೆಯೇ ಆಗುತ್ತದೆ. ಲ್ಯಾಟಿನ್ ಅಮೆರಿಕಾ, ಫಿಲಿಪೈನ್ಸ್ ಮತ್ತು ಆಫ್ರಿಕಾ ದೇಶಗಳಲ್ಲಿ ಅವರು ತಲೆಮಾರುಗಳಿಂದ ಕೆಲಸ ಮಾಡಿದ್ದಾರೆ. ಅಲ್ಲಿನ ಬಹುತೇಕ ಮೂಲನಿವಾಸಿಗಳು ಮತಾಂತರಗೊಂಡಿದ್ದಾರೆ. ಆಮದಾಗಿರುವ ಮತವು ಮಾನವ ಹಕ್ಕುಗಳನ್ನು ತರುವಲ್ಲಿ ವಿಫಲವಾಗಿದೆ ಮತ್ತು ಸಮಸ್ಯೆಗಳನ್ನು ಹೆಚ್ಚು ಉಲ್ಬಣಿಸುವಂತೆ ಮಾಡಿದೆ. ಆದರೂ ಭಾರತದ ಮಧ್ಯವರ್ತಿಗಳು ವಿದೇಶೀ ಪೋಷಕರನ್ನು ಬೇಡುವ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ. ಸಹವರ್ತಿ ಭಾರತೀಯರ ಆತ್ಮಗಳ ಮಾರಾಟಕ್ಕೆ ಬದಲಾಗಿ ಅವರು ಈ ಬೇಡಿಕೆಯನ್ನಿತ್ತಿದ್ದಾರೆ.

ಭಾರತೀಯ ಅಸ್ತಿತ್ವದೆಡೆಗೆ :

ಇದಕ್ಕೆ ಆಧುನಿಕ ರಾಜಕೀಯ ಉತ್ತರವೆಂದರೆ ಹಿಂದುತ್ವ. ಆದರೆ, ಈಗ ಅದೂ ಕೂಡ ಭಾರತೀಯ ಅಸ್ತಿತ್ವಕ್ಕೆ ಪುನಶ್ಚೇತನ ನೀಡಲು ಅಸಮರ್ಥವಾಗಿದೆ. ಭಾರತೀಯತೆಯನ್ನು ವ್ಯಾಖ್ಯಾನಿಸುವ ಬಾಲಿವುಡ್ ಮತ್ತು ಕ್ರಿಕೆಟ್‌ಗಳೆರಡೂ ಜೊಳ್ಳು. ಜಾತ್ಯತೀತ ಪ್ರಜಾಪ್ರಭುತ್ವ ಅಥವಾ ಅಭಿವೃದ್ಧಿ ಮಂತ್ರಗಳು ರಾಷ್ಟ್ರೀಯ ಅಸ್ತಿತ್ವವನ್ನು ಬೆಳೆಸಲಾರವು. ಯುರೋಪಿಯನ್ ಸಿದ್ಧಾಂತಗಳ ಜೊತೆಗೆ ಪಾಪ್ ಸಂಸ್ಕೃತಿಯನ್ನು ಬೆರೆಸಿ ಭಾರತೀಯತೆಯೆಂದು ಹೇಳುವುದೇ ಈಗಿನ ಫ್ಯಾಷನ್ ಆಗಿದೆ. ಇದು ಮೂರ್ಖತನ. ಇಂತಹ ಬೆರಕೆಗಳು ಇಸ್ಲಾಮೀ ಜಿಹಾದ್ ಮತ್ತು ಕ್ರೈಸ್ತ ಸುವಾರ್ತೆಯ ನಡುವೆ ಇರುವ ನಮ್ಮ ವಿಭಜಿತ ಜಾತಿವ್ಯವಸ್ಥೆಯ ನಡುವೆ ಸಂಘಟಿತ ಭಾರತವನ್ನು ಕಟ್ಟಲಾರವು.
ಭಾರತೀಯತೆಯು ವಿಘಟಿತ ಅಸ್ತಿತ್ವಗಳನ್ನು ದಾಟಬೇಕು. ವೋಟ್ ಬ್ಯಾಂಕ್ ಎಷ್ಟೇ ದೊಡ್ಡದಾಗಿರಲಿ ಅಥವಾ ವಿದೇಶೀ ಪ್ರಾಯೋಜಕರು ಎಷ್ಟೇ ಪ್ರಬಲರಾಗಿರಲಿ. ಗಾಂಧೀಜಿ ಭಾರತದ ಒಳ್ಳೆಯ ನಿರೂಪಕರಾಗಿದ್ದರು. ಠಾಗೋರ್ ಮತ್ತು ಅರವಿಂದರು ಭಾರತದ ನಾಗರೀಕತೆಯಲ್ಲಿ ಅನಸ್ಯೂತತೆಯನ್ನು ಕಂಡರು. ನೆಹರುಗೆ ರಾಷ್ಟ್ರೀಯ ದೃಷ್ಟಿಕೋನವಿತ್ತು. ಇದನ್ನು ಅವರ ಇಂದಿರಾ ಗಾಂಧಿ ಸ್ವಲ್ಪ ಬದಲಿಸಿ ಉಗ್ರವಾಗಿ ಪ್ರತಿಪಾದಿಸಿದರು. ಅಶೋಕ, ಚೋಳ ಮತ್ತು ಮರಾಠಾ ಸಾಮ್ರಾಜ್ಯಗಳು ಒಳ್ಳೆಯ ಇತಿಹಾಸವನ್ನು ಹೊಂದಿವೆ. ಈ ಎಲ್ಲ ಇತಿಹಾಸಗಳಲ್ಲಿ ಭಾರತದ ಬಗೆಗಿನ ಕಲ್ಪನೆ ಚೆನ್ನಾಗಿ ವ್ಯಕ್ತವಾಗಿದೆ.
ಭಾರತೀಯತೆಯ ಬಗೆಗೆ ನಿರ್ಭೀತ ನ್ಯಾಯಸಮ್ಮತ ಚರ್ಚೆ ಆಗಬೇಕು :
ಸತ್ವಶಾಲೀ ಭಾರತೀಯತೆಯು ಚರ್ಚೆಯ ವಿಷಯವಾಗಬೇಕು. ಅದರಲ್ಲಿ ಗಂಭೀರ ವಿಷಯಗಳ ಚರ್ಚೆ ಆಗಬೇಕು. ಎಲ್ಲರಿಗೂ ಅದರಲ್ಲಿ ಭಾಗವಹಿಸಲು ಅವಕಾಶ ಇರಬೇಕು - ಅವರು ಅಡ್ವಾನಿಯಿರಬಹುದು ಅಥವಾ ಸೋನಿಯಾ ಆಗಿರಬಹುದು. ಜಾಮಾ ಮಸೀದಿಯ ಇಮಾಮ್ ಆಗಿರಬಹುದು ಅಥವಾ ಹಿಂದೂ ಧರ್ಮಗುರುವೇ ಆಗಿರಬಹುದು. ಬಾಲ್ ಠಾಕ್ರೆ ಅಥವಾ ಭೂಗತ ಜಗತ್ತಿನವರೇ ಆಗಿರಬಹುದು. ಅಂದರೆ, ಇದು ಭಾರತೀಯತೆಯ ಬಗೆಗಿನ ಮುಕ್ತ ಹಾಗೂ ನ್ಯಾಯಸಮ್ಮತ ಚರ್ಚೆಯಾಗಬೇಕು. ಮುಕ್ತವಾಗಿ ಟೀಕೆ ಮಾಡಲು ಎಲ್ಲರಿಗೂ ಅಧಿಕಾರ ಇರಬೇಕು.
ಆದರೆ ವಿದೇಶೀ ತತ್ವಗಳನ್ನು ಆಮದು ಮಾಡಿ ಅವುಗಳ ಮೇಲೆ ವಿದೇಶೀ ಹಕ್ಕುಗಳನ್ನು ಪಡೆದು ಉದ್ಯೋಗ ಪಡೆದ ಭಾರತದ ಬುದ್ಧಿಜೀವಿಗಳ ಮಾಫಿಯಾ ಅಂತಹ ಚರ್ಚೆಗಳನ್ನು ಸರಿಯಾದ ಹಾದಿಯಲ್ಲಿ ನಡೆಸುವುದಿಲ್ಲ. ಪೂರ್ವಾಗ್ರಹಪೀಡಿತರಾಗಿ, ಬೇರೆಯವರು ನಡೆಸುವ ಪ್ರಾಮಾಣಿಕ ಪ್ರಯತ್ನಗಳನ್ನು ಫ್ಯಾಸಿಸಂ ಎಂಬ ಹಣೆಪಟ್ಟಿ ಹಚ್ಚಿ ವಿರೋಧಿಸುತ್ತಾರೆ. ನಾನು ಈ ಬಗ್ಗೆ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ -
ಅಮೆರಿಕದ ಅವಳಿ ಗೋಪುರಗಳ ಮೇಲಿನ ದಾಳಿಗಿಂತ ಕೆಲವು ವರ್ಷಗಳ ಮೊದಲು ಪ್ರಿನ್ಸ್‌ಟನ್ ಮೂಲದ ಇನ್ಫಿನಿಟಿ ಫೌಂಡೇಷನ್ ತಾಲಿಬಾನ್ ಹಾಗೂ ಭಾರತದ ಮೇಲೆ ಅದರ ಪರಿಣಾಮ ಎಂಬ ವಿಷಯದ ಬಗೆಗೆ ಚರ್ಚೆ(ಸಂಶೋಧನೆ) ನಡೆಸಲು ದೆಹಲಿಯಲ್ಲಿರುವ ಹೆಸರಾಂತ ಸಂಸ್ಥೆಗೆ ಸಲಹೆ ನೀಡಿತು. ಆ ಕೇಂದ್ರದ ಬುದ್ಧಿಜೀವಿಗಳು ಇದನ್ನು ನಿರಾಧಾರ ಕಲ್ಪನೆ ಎಂದೂ, ಅಧ್ಯಯನಕ್ಕೆ ಅನರ್ಹವೆಂದೂ ಮತ್ತು ಒಳಸಂಚಿನಿಂದ ಕೂಡಿದ ಅವಾಸ್ತವಿಕ ವರದಿಯೆಂದೂ ಅಭಿಪ್ರಾಯಪಟ್ಟರು. ಸೆಪ್ಟೆಂಬರ್ ೧೧ರ ದಾಳಿಯ ನಂತರವೂ ಅಮೆರಿಕದ ಅಕಾಡೆಮಿ ಆಫ್ ರಿಲಿಜಿಯನ್ - ತಾಲಿಬಾನ್ ಅನ್ನು ಮತೀಯ ವಿದ್ಯಮಾನ ಎಂದು ಪರಿಗಣಿಸಿ ಅಧ್ಯಯನ ಮಾಡಲು ನಿರಾಕರಿಸಿತು. ಅದರ ಬದಲಾಗಿ, ಹಿಂದೂ - ಜಾತಿ, ಗೋವು, ವರದಕ್ಷಿಣೆ, ಅತ್ತೆ, ಸಾಮಾಜಿಕ ದಬ್ಬಾಳಿಕೆ, ಹಿಂಸೆ ಮತ್ತು ಬಗೆಬಗೆಯ ಬೌದ್ಧಿಕ ಚಿಹ್ನೆಗಳ ಬಗೆಗೆ ಅಧ್ಯಯನ ನಡೆಸಿದರು.
ಕೆಲವು ವಿಶ್ಲೇಷಕರು ಇಸ್ಲಾಮೀ ಭಯೋತ್ಪಾದನೆಯನ್ನು ಕಾಶ್ಮೀರದೊಂದಿಗೆ ತಳುಕು ಹಾಕುತ್ತಾರೆ. ಮತ್ತು ಅದು ಅವರ ವಿವಾದ ಬಗೆಹರಿಸುವ ತಂತ್ರವೆಂದು ವಾದ ಮಾಡುತ್ತಾರೆ. ಈಗಿನ ಮುಸ್ಲಿಮರ ವ್ಯವಹಾರವೇ ಪ್ರಗತಿಪರ ಚಿಂತನೆ ; ಎಂದು ಹೇಳುವ ಷಿಕಾಗೋ ವಿಶ್ವವಿದ್ಯಾಲಯದ ಪ್ರೊಫೆಸರ್ ಮಾರ್ಥಾ ನುಸ್ಬಾಂರವರು ಹಿಂದೂ ಫ್ಯಾಸಿಸಂ - ಭಯೋತ್ಪಾದನೆಯ ಪ್ರಮುಖ ಕಾರಣವೆಂದು ಆರೋಪ ಹೊರಿಸುತ್ತಾರೆ. ಮತ್ತು ಮುಂಬೈ ಮಾರಣಹೋಮವನ್ನು ವಿರೋಧಿಸುತ್ತಾ ಅದು ಹಿಂದೂಗಳು ನಡೆಸಿದ ವ್ಯವಸ್ಥಿತ ಕಗ್ಗೊಲೆ, ಮುಸ್ಲಿಮರ ವಿರುದ್ಧದ ಜನಾಂಗೀಯ ಮಾರಣಹೋಮವೆಂದೂ ವಾದ ಮಾಡಿದರು. ಹಿಂದೂಗಳಿಗೆ ಕ್ರಿಶ್ಚಿಯನ್ನರನ್ನು ಕೊಂದು ಅವರ ಶಿಕ್ಷಣಸಂಸ್ಥೆಗಳನ್ನು ನಾಶಪಡಿಸುವ ಯೋಜನೆ ಇದೆಂದೂ ಒಂದಕ್ಕೊಂದು ಜೋಡಿಸಿದರು. ಆ ಮಾರಣಹೋಮದಲ್ಲಿ ಬಲಿಪಶುಗಳಾದವರ ಬಗೆಗೆ ಸ್ವಲ್ಪವೂ ಕರುಣೆಯಿಲ್ಲದ ಅವರ ಲೇಖನUಳನ್ನು ನವೆಂಬರ್ ೧೧ರ ದಾಳಿಯ ಕೆಲವೇ ದಿನಗಳ ನಂತರ ಲಾಸ್ ಏಂಜಲೀಸ್ ಟೈಮ್ಸ್ ಪ್ರಕಟಿಸುತ್ತಿದೆ.
ಇಸ್ಲಾಂನ ಬಗೆಗೆ "ಡಂಬನೆಯ ಕಾರ್ಟೂನ್ ಪ್ರಕಟವಾದಾಗ ಖಂಡನೆ, ಪ್ರತಿಭಟನೆ ಮತ್ತು ಗಲಭೆಗಳೂ ಆಗುತ್ತವೆ. ಆದರೆ, "ಂದೂ ದೇವತೆಗಳ ನೀಚ ಅವಹೇಳನ ಅಥವಾ ಆಕ್ರಮಣಗಳಾದಾಗ ಅಬಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಜಾ ನೀಡಲಾಗುತ್ತದೆ. {ಈ "ಷಯದಲ್ಲಿ ಇನ್ನೂ ಹೆಚ್ಚಿನ ಓದಿಗಾಗಿ "ಇನ್‌ವೇಡಿಂಗ್ ದ ಸೇಕ್ರೆಡ್"(ರೂಪಾ & ಕೋ) ಎಂಬ ಗ್ರಂಥವನ್ನು ನಾನು ಶಿಫಾರಸು ಮಾಡುತ್ತೇನೆ. ರಾಜೀವ್ ಮಲ್ಹೋತ್ರಾರವರು ಈ ಗ್ರಂಥದ ಪ್ರಕಾಶನದಲ್ಲಿ ಮುಖ್ಯ ಭೂ"ಕೆ ವ"ಸಿದ್ದರು}.
'ಗುಣಾತ್ಮಕ'ವಾಗಿ ಯೋಚಿಸಿ ಮತ್ತು ಕೊನೆಯವರೆಗೆ ಸುಖವಾಗಿರಿ :
ಬಾಲಿವುಡ್‌ನ ಚಲನಚಿತ್ರಗಳಲ್ಲಿ ಜೋಡಿಗಳು ಕೊನೆಗೆ ಸುಖವಾಗಿರುತ್ತಾರೆ. ಅಂದರೆ, ಕಥೆ ಸುಖಾಂತ್ಯವಾಗುತ್ತದೆ. ಸಮಸ್ಯೆಗಳನ್ನು ಪರಿಹರಿಸುವ ನನ್ನ ರೀತಿಯ "ಶ್ಲೇಷಣೆಯು ಗುಣಾತ್ಮಕವಾಗಿ ಕೊನೆಗೊಳ್ಳಬೇಕೆಂದು ನನ್ನ ಸ್ನೇ"ತರು ಬಯಸುತ್ತಾರೆ. ಕೈ"ರಿ ಹೋಗುತ್ತಿರುವ ಭಾರತದ ಸಮಸ್ಯೆಗಳ ಬಗೆಗೆ ನಾನು ಪ್ರಸ್ತುತಪಡಿಸುವ ದೃಢವಾದ ಸಾಕ್ಷಿಗಳು ಅವರ ದ್ಟೃಯಲ್ಲಿ 'ತೀರಾ ನಕಾರಾತ್ಮಕ'. ಸುಖವಾದ ಅಂತ್ಯದಿಂದ "ಮ್ಮುಖವಾಗಿ ಕೆಲಸ ಮಾಡುವುದು ಮತ್ತು ಅಂತಹ ಸುಖಾಂತ್ಯವನ್ನೇ ಹೇಳುವ ಸಾಕ್ಷಿಗಳನ್ನು ಪ್ರಸ್ತುತಪಡಿಸುವುದು ಭಾರತೀಯ ಮಾನಸಿಕ ಬೇನೆ. ವೈದ್ಯರು ರೋಗದ ನಕಾರಾತ್ಮಕ ವರದಿಗಳನ್ನು ಅಸಡ್ಡೆ ಮಾಡಬಾರದು ಎನ್ನುತ್ತೇವೆ. ಹಾಗೆಯೇ, ಷೇರು ಮಾರುಕಟ್ಟೆಯ ಕುಸಿತದ ಬಗೆಗೆ ತುಂಬಾ ಯೋಚಿಸುತ್ತೇವೆ. ಮತ್ತು ಶಿಕ್ಷಕರು ಅ"ಧೇಯ "ದ್ಯಾರ್ಥಿಗಳನ್ನು ಶಿಕ್ಷಿಸಬೇಕು ಎನ್ನುತ್ತೇವೆ. "ಒಳ್ಳೆಯ" ಪರ್ಯಾಯಗಳು ಇಲ್ಲದಿದ್ದರೇನಂತೆ ?
ಪಾಕಿಸ್ಥಾನದ "ರುದ್ಧದ ಯುದ್ಧತಂತ್ರಗಳು ಭಾರತೀಯ ಮುಸ್ಲಿಮರ ಭಾವನೆಗಳನ್ನು ಕೆರಳಿಸಬಾರದು ಎಂಬ ನಮ್ಮ ನಾಯಕರ ಧೋರಣೆ ಕಸಿ"ಸಿಯನ್ನುಂಟುಮಾಡುತ್ತದೆ. ಇದರಿಂದ, ಭಾರತೀಯ ಮುಸ್ಲಿಮರು - ಹೆಚ್ಚು ಮುಸ್ಲಿಮರು, ಕಡಿಮೆ ಭಾರತೀಯರು ಎಂದಾತಲ್ಲವೇ ? ಭಾರತದ ಉಗ್ರ ಕ್ರಮವು ಜಿಹಾದ್‌ಅನ್ನು ಹೆಚ್ಚಿಸುತ್ತದೆ ಮತ್ತು ಅಣು ಯುದ್ಧಕ್ಕೆ ಆಹ್ವಾನ ನೀಡುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಭಯಂಕರ ಕ್ಯಾನ್ಸರ್ ರೋಗವು ಟ್ಯೂಮರ್‌ನ ಚರ್ಮಕ್ಕಿಂತ ಹೊರಗೆ ಹರಡಿದಾಗ, ಅದರ ಮೇಲೆ ನೇರ ಆಕ್ರಮಣ ನಡೆಸಲೇಬೇಕು. ಅದಕ್ಕೋಸ್ಕರ ತೆಗೆದುಕೊಳ್ಳುವ "ಟ"ನ್‌ಗಳು ಅಥವಾ ಹಾಡು ಮತ್ತು ನೃತ್ಯ ಅರ್ಥ"ನ. ಆಟ, ಯುದ್ಧ, ಔಷಧಿ ಮತ್ತು ಮಾರ್ಕೆಟಿಂಗ್‌ನ "ಷಯದಲ್ಲಿ ಕೇವಲ ಆತ್ಮ ರಕ್ಷಣೆಂದ ಗೆಲ್ಲಲು ಸಾಧ್ಯ"ಲ್ಲ. ನಮ್ಮ ಕ್ರಮಗಳು ಕಾರ್ಯರೂಪಕ್ಕೆ ಬರದಿದ್ದಾಗ ಕೇವಲ ಬೆದರುಬೊಂಬೆಗಳಾಗುತ್ತವೆ. ರ್‍ಟ್ರಾಯ "ತಾಸಕ್ತಿಗಿಂತ ಅಲ್ಪಸಂಖ್ಯಾತರ ತ್ಟುಕರಣವೇ ಹೆಚ್ಚಾದಾಗ, ನಮ್ಮ ಶತ್ರುಗಳು ನಮ್ಮ ಬಲ"ನತೆಯ ಲಾಭ ಪಡೆಯುತ್ತಾರೆ. ಪಾರ್ಶ್ವವಾಯು ಬಡಿದ ಭಾರತವು ಪರಕೀಯರಿಗೆ ಸುಲಭವಾಗಿ ಆಹಾರವಾಗುತ್ತದೆ.
ದೇಶಗಳು ಆಡುವ ಆಟ :
ಭಾರತೀಯ ಮಾನಸಿಕತೆ ಸಹಜಸ್ಥಿತಿಗೆ ಮರಳಿದಾಗ ಅದನ್ನು "ನಿ"ಯತೆ" ಎಂದು ಜರಿಯಲಾಗುತ್ತದೆ. ಇಲ್ಲಿನ ಪ್ರತಿಯೊಂದೂ ಪ್ರಮುಖ ಘಟನೆ ನೋಡಿದಾಗ - ಅಸಮರ್ಪಕ ಚಿಂತನೆ, ಭಯೋತ್ಪಾದನೆಯ ಬಗೆಗೆ ಅಸಡ್ಡೆ ಮತ್ತು ಹೇಗೋ ಬದುಕಿದರಾತೆಂಬ ಭಾವನೆ ದಟ್ಟವಾಗಿ ಕಾಣುತ್ತದೆ. ಕ್ರಾಂತಿಕಾರಕ ಆಲೋಚನೆಗಳ ಅನುಷ್ಠಾನಕ್ಕಾಗಿ ಒಳ್ಳೆಯ ಯೋಜನೆ ಬೇಕೇಬೇಕು.
ಭೂರಾಜ್ಯಶಾಸ್ತ್ರದ ಚದುರಂಗದಾಟದಲ್ಲಿನ ಪಟ್ಟುಗಳನ್ನು ಭಾರತ ಚೆನ್ನಾಗಿ ಅರಿತುಕೊಳ್ಳಬೇಕು. ಒಂದು ಕಡೆಯ ಆಟ ಇನ್ನೊಂದು ಕಡೆಯ ಆಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆಮದು-ರಫ್ತು ನೀತಿ ಜಟಿಲಗೊಳ್ಳುತ್ತದೆ. ದಕ್ಷಿಣ ಏಷ್ಯಾದ ಈ ಚದುರಂಗದಾಟದಲ್ಲಿ ಒಂದು ಕಡೆರುವುದು ಅಮೆರಿಕಾ - ಭಾರತ - ಪಾಕಿಸ್ಥಾನಗಳು. ಇನ್ನೊಂದು ಕಡೆರುವುದು ಅದೇ ಪಾಕಿಸ್ಥಾನ! ಮತ್ತು ಚೈನಾ. ಪಶ್ಚಿಮ ದೇಶಗಳ ಜೊತೆಗಿನ ಬಾಹ್ಯ ಆಟಗಳ ಹೊರತಾಗಿ ಭಾರತವು ತನ್ನ ದೇಶದಲ್ಲಿರುವ "ದೇಶೀ ಪ್ರಾಯೋಜಿತ "ಘಟನೆಗಳ ತ್ಟುಕರಣಕ್ಕಾಗಿ ಆಂತರಿಕ ಆಟಗಳನ್ನೂ ಆಡುತ್ತದೆ. ಪಶ್ಚಿಮದ "ರುದ್ಧದ ಇಸ್ಲಾಂನ ಆಟದಲ್ಲಿ ಮತವನ್ನು ದಾಳವಾಗಿ ಬಳಸಲಾಗುತ್ತಿದೆ. ಭಾರತದಲ್ಲಿರುವ "ಘಟನೆಗಳಿಂದ, ಅತ್ಯಂತ ದೊಡ್ಡ ಮಾರಿಕಟ್ಟೆಯಾದ ಈ ದೇಶದಲ್ಲಿ ಮತಾಂತರ ಅವ್ಯಾಹತವಾಗಿ ನಡೆಯುತ್ತಿದೆ. "ದೇಶೀ ಚದುರಂಗದಾಟದಲ್ಲಿ ಭಾರತವನ್ನು ಒಂದು ಮಾರುಕಟ್ಟೆಯಾಗಿ, ಸರಬರಾಜು ಮಾಡುವ ಕೇಂದ್ರವಾಗಿ, ಪ್ರತಿಸ್ಪರ್ಧಿಯಾಗಿ ಮತ್ತು ಹೂಡಿಕೆಯ ಕೇಂದ್ರವೆಂಬಂತೆ ಬಿಂಬಿಸಲಾಗಿದೆ.
ಇನ್ನೊಂದು ಚದುರಂಗದಾಟದಲ್ಲಿ ದಕ್ಷಿಣ ಏಷ್ಯಾದ ಬುದ್ಧಿಜೀ"ಗಳು ಭಾರತೀಯ "ದ್ವಾಂಸರಿಗೆ ಸಿಪಾಗಳಿಗೆ ನೀಡುವಂತೆ ಉಪನ್ಯಾಸ ನೀಡುತ್ತಾರೆ. ಮತ್ತು ಅವರಿಗೆ ಸಂಬಂಧಪಟ್ಟ ಸಂಸ್ಥೆಗಳನ್ನು - ಹಣ ಕೊಟ್ಟು ಕೊಂಡುಕೊಂಡಂತೆ ಆಡಿಸುತ್ತಾರೆ. ಇರಾಕ್ ಮೇಲಿನ ದಾಳಿಂದ ನಿಜವಾದ ಲಾಭವಾದದ್ದು "ಶ್ವ"ದ್ಯಾಲಯಗಳಿಗೆ ಮತ್ತು ಮಾನವ ಹಕ್ಕು ತಜ್ಞರಿಗೆ. ಈ ಆಟದಲ್ಲಿನ ಆಟಗಾರರಾದ ಅವರು, ಬರಾಕ್ ಒಬಾಮಾ ತಮ್ಮ ಬಜೆಟ್‌ನಲ್ಲಿ "ದಕ್ಷಿಣ ಏಷ್ಯಾ"ವನ್ನು ಆಟ ಆಡಿಸಲು ಶತಕೋಟಿ ಡಾಲರ್‌ಗಳನ್ನು "ಸಲಿಡಲಿದ್ದಾರೆ ಎಂದು ಬಯಸುತ್ತಿದ್ದಾರೆ.
ಈ ಅಸ್ತಿತ್ವಗಳ ಪರಸ್ಪರ ಘರ್ಷಣೆದ್ದರೂ ಭಾರತ ತನ್ನ ಅನೇಕತೆಂದಲೇ ಒಂದಾಗುತ್ತಿದೆ. ಸೈನ್ಯಕ್ಕಾಗಿ ಹಣ ಖರ್ಚು ಮಾಡಲು ದೇಶ ಸಂಪದ್ಭರಿತವಾಗಿರಬೇಕು. ಇನ್ನಾವುದೇ ಸಂಸ್ಥೆಗಿಂತ ಹೆಚ್ಚಿನ ರೀತಿಯಲ್ಲಿ ಸೈನ್ಯವು ದೇಶವನ್ನು ಒಂದು ಮಾಡುತ್ತದೆ. ಏಕೆಂದರೆ, ಸೈನಿಕರು ದೇಶದ ಜೊತೆಗೆ ತಮ್ಮನ್ನು ತಾವು ಗುರುತಿಸಿಕೊಂಡಿರುತ್ತಾರೆ ಮತ್ತು ದೇಶಕ್ಕಾಗಿ ಪ್ರಾಣ ಕೊಡಲೂ ತಯಾರಿರುತ್ತಾರೆ.
ಅಮೆರಿಕದ ಪ್ರಸ್ತುತ "ದೇಶಾಂಗ ನೀತಿಯು ಭಾರತದ "ದೇಶಾಂಗ ನೀತಿಯನ್ನು ಬೆಂಬಲಿಸುತ್ತಿದೆ. ಆದರೆ, ಇಲ್ಲಿ ಭಾರತವು - ಇಸ್ಲಾ" ಮತ್ತು ಚೈನಾ ದೇಶಗಳೆದುರಿಗೆ ದಾಳವಾಗಿ ಬಳಕೆಯಾಗುತ್ತಿದೆ ಎಂಬುದನ್ನು ಮನಗಾಣಬೇಕು. ಕಾಲದ ಓಟದಲ್ಲಿ ಅಮೆರಿಕವು ಭಾರತವನ್ನು - ಚೈನಾದ ತರಹ ಸೂಪರ್ ಪವರ್ ಆಗಿಯೋ, ಪಾಕಿಸ್ಥಾನದ ತರಹ ಅಪಾಯಕಾರಿ "ಘಟಿತ ದೇಶವನ್ನಾಗಿಯೋ ನೋಡಲು ಬಯಸುವುದಿಲ್ಲ. ಅದು ಭಾರತವನ್ನು ಈ ಎರಡೂ ವೈರುಧ್ಯಗಳಿಗೆ ಹೋಗದಂತೆ "ನಿಭಾಸುತ್ತದೆ". ಆನೆ ಯಾವತ್ತಿಗೂ ಸಾಕುಪ್ರಾಣಿಯಾಗದು. ಅದು ತನ್ನನ್ನು ತಾನೇ ಸಾಕಿಕೊಳ್ಳಬೇಕು.
ಭಾರತ ಕಲಿಯಬೇಕಾದ ಪಾಠಗಳು :
ಅಮೆರಿಕದಲ್ಲಿ ವಲಸಿಗಳೇ ಹೆಚ್ಚಾಗಿದ್ದರೂ, ಅಲ್ಲಿ ಪ್ರಾಧಾನ್ಯತೆ ಪಡೆಯುವುದು ಪ್ರಮುಖ ಮತವೇ. ಉನ್ನತ ಸ್ತರದ ರಾಜಕೀಯ ಪದಾಕಾಂಕ್ಷಿಗಳು ಒಳ್ಳೆಯ ಕ್ರಿಶ್ಚಿಯನರಲ್ಲದಿದ್ದರೆ, ಅವರು ಅಲ್ಲಿ ಭಾರೀ "ನ್ನಡೆ ಅನುಭ"ಸುತ್ತಾರೆ. ಕ್ರೈಸ್ತ ಮತದ "ಭಾಗವು ಆ ಮತವನ್ನು ರೂಪಿಸಿದ ಪೋಪರ ಆಜ್ಞೆಯಲ್ಲ ಅಥವಾ ಅಲ್ಪಸಂಖ್ಯಾತ ಮತಗಳ ಸಬಲೀಕರಣವೂ ಅಲ್ಲ. ಬಿಳಿಯರ ಅಸ್ತಿತ್ವದ ಆಧಾರದ ಮೇಲೆ ಅಮೆರಿಕದ ನಿರ್ಮಾಣವಾತು. ಇದಕ್ಕೆ ನೆರವಾದುದು, ಅವರು ನಡೆಸಿದ ಅಲ್ಲಿನ ಮೂಲ ನಿವಾಸಿಗಳ ಮಾರಣಹೋಮ. ಭಾರತದ ಪುಣ್ಯ ! ಇಲ್ಲಿ "ಗಾಗಲಿಲ್ಲ. ಒಬಾಮಾ ಸುಧಾರಿತ ಏಕೀಕರತ ರಾಷ್ಟ್ರವನ್ನು ಬಯಸಿದ್ದಾರೆ. "ಂದಿನ ನಾಯಕರು ಅಲ್ಪಸಂಖ್ಯಾತವಾದದಿಂದ ಮೇಲೆ ಬಂದಿದ್ದರು. ಭಾರತದ ಅಸ್ತಿತ್ವವನ್ನು ಶಿಥಿಲಗೊಳಿಸುವ ದ್ರಾ"ಡರು, ಮಾಯಾವತಿ ಮತ್ತು ಈ ದೇಶದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ನಾಯಕರಿಗಿಂತ ಒಬಾಮಾ ನಿಸ್ಸಂದೇಹವಾಗಿ ಆ ದೇಶದ ಮತದ ನಿಷ್ಠಾವಂತ ಅನುಯಾ. ಅಮೆರಿಕಾ ತನ್ನ ಘನತೆಯನ್ನು ಇಂಡೋ - ಯುರೋಪಿಯನ್ ಮೊದಲಾದ "ಶ್ರಜನಾಂಗಗಳ ಮೂಲಕ ತೋರ್ಪಡಿಸುತ್ತದೆ. ಇಲ್ಲಿ ಎದ್ದು ಕಾಣುವುದು ಅಮೆರಿಕದ ಶ್ರೇಷ್ಠತೆಯೇ ! ಅಂದರೆ, ಎಲ್ಲ ಉಪ - ಅಸ್ತಿತ್ವಗಳನ್ನು ಅದು ರದ್ದುಗೊಳಿಸುತ್ತದೆ. ಅಲ್ಲಿನವರಿಗೆ ಅಮೆರಿಕನ್ ಅಲ್ಲದವನು ನಾಯಕನಾದರೆ ಅವನು ಪ್ರಾಣಾಂತಿಕನೇ.
ಇದಕ್ಕೆ ಪ್ರತಿಯಾಗಿ ಇಲ್ಲಿ ನೋಡಿದಾಗ ಮಾಯಾವತಿ ಮತ್ತು ಈ ದೇಶದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ನಾಯಕರು, ದ್ರಾ"ಡರು ಹಾಗೂ ಇತರೆ ಅಲ್ಪಸಂಖ್ಯಾತರ ಮತಗಳನ್ನು ಪಡೆಯುವವರು ಭಾರತೀಯ ಸಂಗಟಿತ ಅಸ್ತಿತ್ವಗಳನ್ನು ಅಡ ಇಟ್ಟು ಅಧಿಕಾರ ಪಡೆದಿದ್ದಾರೆ. "ಘಟಿತ ಭಾರತೀಯ ಅಸ್ತಿತ್ವಗಳನ್ನು ಬೆಂಬಲಿಸುವವರಿಗಿಂತ ಭಿನ್ನನಾದ ಒಬಾಮಾ - ಸಂಘಟಿತ ಭಾರತೀಯ ನಾಗರೀಕತೆಯೊಳಗಿನ ಗಾಂಧಿ ಮತ್ತು ಅಂಬೇಡ್ಕರರಿಗೆ ಹೆಚ್ಚು ಹತ್ತಿರ. ಭಾರತವು ಅಮೆರಿಕದ ರಚನೆಗಳಿಂದ ಕಲಿಯಬಹುದು. ಭಾರತದ ಶತಕೋಟಿಪತಿಗಳು ರಾಷ್ಟ್ರದ ಗುಣಾತ್ಮಕ ಉಪನ್ಯಾಸ ಮತ್ತು ಚರ್ಚೆಗಳಲ್ಲಿ ಮುಖ್ಯ ಪಾತ್ರ ವ"ಸಬೇಕು ಮತ್ತು ಅವುಗಳನ್ನು ಆಯೋಜಿಸಬೇಕು. ಅಮೆರಿಕದ ಅಸ್ತಿತ್ವವನ್ನು ಮತ್ತು ಇತಿಹಾಸವನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವ"ಸಿದ ಕಾರ್ನೆಗಿ, ರಾಫೆಲ್ ಮತ್ತು ಫೋರ್ಡ್‌ಗಳಂತೆ ಇವರೂ ವ್ಯವಹರಿಸಬೇಕು. ಅಮೆರಿಕದ ಆಂತರಿಕ ಸ್ತರಗಳನ್ನಾಧರಿಸಿದ ಯೋಗ್ಯತಾಶಾ"ಯು ಭಾರತದ ಜಾತ್ಯಾಧಾರಿತ ರಾಜಕಾರಣಕ್ಕಿಂತ ಎಷ್ಟೋ "ಗಿಲಾದುದು.
ಅಮೆರಿಕಾದ ಪ್ರಾದೇಶಿಕ ಕಲಿಕಾ ಪದ್ಧತಿಗಳಲ್ಲಿ ಅಲ್ಲಿನ "ಶ್ವ"ದ್ಯಾಲಯಗಳು ಸರ್ಕಾರ, ಯೋಚನಾ ಕೂಟ ಮತ್ತು ಚರ್ಚುಗಳೊಡನೆ ಒಳ್ಳೆಯ ಸಂಬಂಧವನ್ನು ಹೊಂದಿವೆ. ಅವರು ತಮ್ಮ ದ್ಟೃಂದ ಇತರ ರಾಷ್ಟ್ರಗಳ ನಾಗರೀಕತೆಗಳನ್ನು ಅಭ್ಯಾಸ ಮಾಡುತ್ತಾರೆ. ಭಾರತವೂ ಹಾಗೆ ಮಾಡಲು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಬೇಕು. ಈ "ಷಯಲ್ಲಿ "ಶ್ವಾದ್ಯಂತ ಹರಡಿರುವ ಚೈನಾದ ೧೦೦ ಕನ್ಫೂಶಿಯಸ್ ಕೇಂದ್ರಗಳು ನಮಗೆ ಮಾದರಿಯಾಗಬೇಕು.
ಸಿದ್ಧ ಉತ್ತರಗಳನ್ನು ಹೊಂದಿರುವ ಸೈದ್ಧಾಂತಿಕ ಶಿಬಿರಗಳು ಮಾಯವಾಗುತ್ತಿವೆ. ಭಾರತದ ಬುದ್ಧಿಮತ್ತೆ ಇನ್ನೂ ಹೆಚ್ಚಬೇಕು, ಪಳಗಬೇಕು, ಬದಲಾಗಬೇಕು ಮತ್ತು ತನ್ನ ಹೆಸರಿಗೆ ಯೋಗ್ಯವಾದ ರ್‍ಟ್ರಾಯ ಅಸ್ತಿತ್ವವನ್ನು ನಿಮಿ೵ಸಬೇಕು.
(ಆಂಗ್ಲ ಮೂಲ - ರಾಜೀವ್ ಮಲ್ಹೋತ್ರಾ)
* * *

No comments: